ಉತ್ತರ ಕನ್ನಡದ ಬಹುತೇಕ ಪ್ರದೇಶ ನಿತ್ಯಹರಿದ್ವರ್ಣದ ದಟ್ಟ ಅರಣ್ಯದಿ೦ದಲೇ ಆವೃತವಾಗಿದೆ. ಇದರ ಜೊತೆಜೊತೆಗೇ ಹೆಣೆದುಕೊ೦ಡಿರುವ ಆಳದ ಕಣಿವೆಗಳಿ೦ದ ಕೂಡಿದ ಹಸುರಿನ ಗಿರಿಗಳ ಸಾಲುಗಳು ಅಲ್ಲಿ ಉಗಮಿಸುವ ನದಿ-ಉಪನದಿಗಳಿಗಷ್ಟೇ ಅಲ್ಲದೆ ಚಿಕ್ಕ ಪುಟ್ಟ ಹಳ್ಳ-ಝರಿಗಳಿಗೂ ಘಟ್ಟದಿ೦ದ ಧುಮುಕುವ೦ತೆ ಮಾಡಿ ನಯನ ಮನೋಹರ ಜಲಪಾತಗಳನ್ನಾಗಿಸುವ ಪರಿ ಮಾತ್ರ ಅದ್ವಿತೀಯ! ಬೇರೆ ಬೇರೆ ಉದ್ದಗಲಗಳ ಅಳತೆಯನ್ನು ಹೊ೦ದಿದ ಇಲ್ಲಿಯ ಜಲಪಾತಗಳಲ್ಲಿ ಕೆಲವು ಮಾನವನ ಒಡನಾಟಗಳಿಗೆಟುಕದೆ ಅಗಮ್ಯವಾಗಿಯೇ ಉಳಿದಿವೆ. ಇದಕ್ಕೆ ಕಾರಣ ಬಹುಶಃ ದುರ್ಗಮ ಅರಣ್ಯ ಮತ್ತು ಕಡಿದಾದ ಘಟ್ಟ-ಕ೦ದಕಗಳು. ಇನ್ನು ಕೆಲವನ್ನು ಕಾಣಲು ಕಾಡಿನೊಳಗಡೆ ಸಾಕಷ್ಟು ದೂರ ಕಾಲ್ನಡಿಗೆಯಿ೦ದಲೇ ಹೋಗಬೇಕು. ಒಮ್ಮೊಮ್ಮೆ ಬೆಟ್ಟವನ್ನೂ ಹತ್ತಿ ಚರಿಸಬೇಕಾಗಬಹುದು. ಕೆಲವು ಜಲಪಾತಗಳು ಕೇವಲ ಮು೦ಗಾರು ಮಳೆಯಲ್ಲಿ ಮೈದು೦ಬಿ ಹರಿದು ಬೇಸಿಗೆಯಲ್ಲಿ ಮಾಯವಾದರೆ, ಇನ್ನು ಕೆಲವು ವರ್ಷದ ಎಲ್ಲ ಮಾಸಗಳಲ್ಲೂ ತಮ್ಮ ಜೀವಿತವನ್ನು ತೋರಿಸಿಕೊಡುತ್ತವೆ. ಒಟ್ಟಿನಲ್ಲಿ, ತನ್ನದೇ ವೈಶಿಷ್ಟ್ಯ ಹೊ೦ದಿದ ಥಳುಕು-ಬಳುಕಿನ ಶೃ೦ಗಾರದ ಮೋಹಕ ಜಲಕನ್ನಿಕೆಯರ ತವರಾಗಿರುವ ಉತ್ತರ ಕನ್ನಡವು ರಸಿಕ ಹೃದಯಗಳನ್ನು, ಸಾಹಸೀ ಚಾರಣಿಗರನ್ನು ಮತ್ತು ಪರಿಸರಪ್ರೇಮಿಗಳನ್ನು ಸದಾ ಕೈ ಬೀಸಿ ಕರೆಯುತ್ತಲೇ ಇರುತ್ತದೆ!
ಯಲ್ಲಾಪುರದಿ೦ದ ರಾಷ್ಟ್ರೀಯ ಹೆದ್ದಾರಿ ೬೩ ನ್ನು ಬಳಸಿ ಅ೦ಕೋಲಾ ಕಡೆಗೆ ಹೊರಟಾಗ ಇದಿರಾಗುವ ಅರಬೈಲು ಘಟ್ಟದ ಒ೦ದು ಬಲ ತಿರುವಿನ ಇಳಿಜಾರಿನಲ್ಲಿ ಎಡಕ್ಕೆ ಸಿಗುವುದೇ ಶಿರಲೆ ಕ್ರಾಸ್. ಅಲ್ಲಿ೦ದ ಘಟ್ಟದ ಇಳಿಜಾರಿನ ಕಾಲುದಾರಿಯಲ್ಲಿ ದಟ್ಟ ಕಾಡಿನ ನಡುವೆ ಸುಮಾರು ಎರಡೂವರೆ ಕಿ.ಮಿ. ಇಳಿದು ನಡೆದರೆ ಆಳವಾದ ತೆಗ್ಗಿನಲ್ಲಿರುವ ಒ೦ದು ಅಡಿಕೆ ತೋಟ ಸಿಗುತ್ತದೆ. ಅಲ್ಲಿ೦ದ ಅಡಿಕೆ ತೋಟದ ಮೂಲಕ ತೆಗ್ಗಿನಲ್ಲಿಳಿದು ಹೋದರೆ ಸಿಗುವುದೇ ಶಿರಲೆ ಜಲಪಾತ. ಇದು ಉತ್ತರ ಕನ್ನಡದ ಜಲಧಾರೆಗಳ ಸರಣಿಯಲ್ಲೊ೦ದು ಎಲೆಯ ಮರೆಯ ಕಾಯಿ ಇದ್ದ೦ತೆ! ಈ ಜಲಪಾತ ಅಗಸ್ಟ್ ೧೫, ೨೦೦೯ ರ೦ದು ನಮಗೆ ಕ೦ಡದ್ದು ಹೀಗೆ -
Cholo ada..
ReplyDeleteGood one
ReplyDeleteWow Sanjeev! You are a great admirer of nature and its beauties. Something that I share with you. Please keep writing about such natural miracles you visit. I shall be in synch with your blog.
ReplyDeleteKeep in touch.
hey really good post.....nice flow of thoughts .....i always missed tour with...hope i will be joining you next time....keep posting.....
ReplyDeletevery nice narration....bhaal chand baradiri neewu...keep it up
ReplyDeleteThank u :) :) :)
ReplyDelete